ಅಗತ್ಯತೆಯ ಮೂಲ

ಮನುಷ್ಯರಾಗಿ ನಮ್ಮ ಜೀವನವು ಅನಿಶ್ಚಿತತೆಗಳಿಂದ ಸುತ್ತುವರಿದಿದೆ; ಅಂತಿಮವಾಗಿ ನಮ್ಮ ಸಾವು ಮಾತ್ರ ನಿಶ್ಚಿತವಾಗಿರುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮ ಮರಣದ ಬಗ್ಗೆ ತಿಳಿದಿರುತ್ತದೆ, ಆದರೆ ಅದು ನಮ್ಮ ಬಾಗಿಲಿನಲ್ಲಿಯೇ ಇದ್ದಾಗ ಅದರ ವಿನಾಶಕಾರಿ ಪರಿಣಾಮಗಳನ್ನು ಹಠಾತ್ ಆಗಿ ಅನುಭವಿಸಬೇಕಾಗುತ್ತದೆ. ಅಪರೂಪಕ್ಕೆ ಮಾತ್ರ ಒಂದು ಎಚ್ಚರಿಕೆ ಅಥವಾ ಯಾವುದೇ ಸೂಚನೆ ಕಂಡುಬರುತ್ತದೆ. ನೀವು ಪ್ರೀತಿಪಾತ್ರರನ್ನು, ಕುಟುಂಬ ಅಥವಾ ಸ್ನೇಹಿತರನ್ನು ಕಳೆದುಕೊಂಡಿದ್ದರೆ, ನಿಮ್ಮ ದುಃಖದ ಅನುಭವವು ಆ ವ್ಯಕ್ತಿಯೊಂದಿಗೆ ನೀವು ಹೊಂದಿದ್ದ ಸಂಬಂಧದ ಸ್ವರೂಪವನ್ನು ಅವಲಂಬಿಸಿರುತ್ತದೆ. ಅನೇಕ ಸಂದರ್ಭಗಳಲ್ಲಿ, ನಿಮ್ಮ ಸ್ವಂತ ಆಲೋಚನೆಗಳೊಂದಿಗೆ ನೀವೇ ವ್ಯವಹರಿಸುವಂತೆ ಬಿಡಬಹುದು, ವ್ಯಕ್ತಿಯ ಸಾವಿನ ನಂತರ ಉದ್ಭವಿಸುವ ನೈಜ-ಪ್ರಪಂಚದ ಸನ್ನಿವೇಶಗಳನ್ನು ಪರಿಗಣಿಸಲು ಆಸ್ಪದವೇ ಇಲ್ಲದಿರಬಹುದು. ಈ ಸಂದರ್ಭದಲ್ಲಿ, ಕೆಲವರು ತಮ್ಮ ದುಃಖವನ್ನು ವ್ಯಕ್ತಪಡಿಸಲು ಮತ್ತು ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗುತ್ತದೆ, ಇತರರು ಆ ವ್ಯಕ್ತಿಯ ನಷ್ಟದಿಂದ ಭಾರೀ ಆಘಾತಕ್ಕೊಳಗಾಗಬಹುದು ಮತ್ತು ಜೀವನದಲ್ಲಿ ಮುಂದೆ ಸಾಗುವುದು ಅಸಾಧ್ಯವಾಗಬಹುದು. ಕಡುಸಂಕಟವು ದುಃಖಿತರ ಮನಸ್ಸುಗಳನ್ನು ಮಬ್ಬಾಗಿಸುತ್ತದೆ.

ನಿಮ್ಮ ಪ್ರೀತಿಪಾತ್ರರ ಸಾವಿನಿಂದಾಗಿ ಉಂಟಾಗುವ ಆಘಾತ ಮತ್ತು ದುಃಖವನ್ನು ಮೀರಿ, ಜೀವನವು ಮುಂದುವರಿಯಬೇಕು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಗಮನಹರಿಸಬೇಕು, ಅವುಗಳನ್ನು ಹೆಚ್ಚು ಕಾಲ ನಿರ್ಲಕ್ಷಿಸಲಾಗುವುದಿಲ್ಲ. ಕುಟುಂಬದಲ್ಲಿ ಪ್ರಮುಖ ಆದಾಯವನ್ನು ತರುವ ವ್ಯಕ್ತಿಯ ಸಾವು ಸಂಭವಿಸಿದ್ದರೆ ಇದು ಇನ್ನೂ ಹೆಚ್ಚು ಜರೂರಿನ ವಿಷಯವಾಗಿರುತ್ತದೆ. ಮೃತ ವ್ಯಕ್ತಿಯ ಒಡೆತನದ ಆಸ್ತಿಗಳು ಮತ್ತು ಸಂಪತ್ತಿನ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಹಣಕಾಸಿನ ಭದ್ರತೆಯು ಸಂಪೂರ್ಣ ಪ್ರಕ್ರಿಯೆಯನ್ನು ನಡೆಸುತ್ತದೆಯಾದರೂ, ಈ ಹಂತದಲ್ಲಿ ಪರಿಣತಿ ಮತ್ತು ಸಮರ್ಪಿತ, ಸಮಯ ಮಿತಿಯ ಪ್ರಯತ್ನದ ಅಗತ್ಯವನ್ನು ಅನುಭವಿಸಲಾಗುತ್ತದೆ.

‘ಜೀವನವು ಮುಂದುವರಿಯಲೇಬೇಕು’, ಮತ್ತು ಈ ಆಲೋಚನೆಯನ್ನು ಪ್ರೀತಿಪಾತ್ರರ ಮತ್ತು ಆತ್ಮೀಯರ ಮನಸ್ಸಿನಲ್ಲಿ ಬೇರೂರಿಸಬೇಕಾಗುತ್ತದೆ. ಪ್ರಕ್ರಿಯೆಯು ಪ್ರಾರಂಭವಾಗಲು ಮತ್ತು ಕೆಲವು ದಿನಚರಿಗಳನ್ನು ರೂಪಿಸಲು ಇದು ಮುಖ್ಯವಾಗಿದೆ.

ಇವು ಪ್ರಕ್ರಿಯೆಯನ್ನು ಒಳಗೊಂಡಿರುವ ಚಟುವಟಿಕೆಗಳಾಗಿವೆ ಮತ್ತು ದಾಖಲಾತಿ ಸಲ್ಲಿಕೆ ಮತ್ತು ನಿಯಮಿತ ಅನುಸರಣೆಗಳ ಅಗತ್ಯವಿರುತ್ತದೆ. ಅವುಗಳನ್ನು ಎಷ್ಟು ಬೇಗನೆ ಮಾಡಲಾಗುತ್ತದೆಯೋ ಅಷ್ಟು ವೇಗವಾಗಿ ಕುಟುಂಬವು ಹಣಕಾಸಿನ ಸ್ಥಿರತೆ ಮತ್ತು ಭದ್ರತೆಯನ್ನು ಪಡೆಯುತ್ತದೆ.

ಈ ಹಿಂದೆ ವಿಸ್ತೃತ ಕುಟುಂಬ ಸದಸ್ಯರು ಈ ಪ್ರಕ್ರಿಯೆಯಲ್ಲಿ ದುಃಖಿತ ಕುಟುಂಬಕ್ಕೆ ಸಹಾಯ ಮಾಡಲು ಲಭ್ಯರಿದ್ದಿರಬಹುದು, ಆದರೆ ಕುಟುಂಬವು ಚಿಕ್ಕದಾದಂತೆ, ಕುಟುಂಬ ಸದಸ್ಯರು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿರುತ್ತಾರೆ, ಇತರ ಸದಸ್ಯರಿಗೋಸ್ಕರ ದಿನನಿತ್ಯದ ಜೀವನದಿಂದ ಸಮಯವನ್ನು ಕೊಡುವುದು ಒಂದು ನಿರ್ಬಂಧವಾಗಿದೆ. ಇದಲ್ಲದೆ ಮೃತ ವ್ಯಕ್ತಿಯ ಆಸ್ತಿಗಳು ಮತ್ತು ಹೂಡಿಕೆಗಳ ವಿವರಗಳನ್ನು ವಿಸ್ತೃತ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವುದು ಮೃತನ ಕುಟುಂಬಕ್ಕೆ ಕಸಿವಿಸಿಯನ್ನು ಉಂಟುಮಾಡಬಹುದು. ಪ್ರತಿ ಸ್ವತ್ತು ವರ್ಗಕ್ಕೆ ನಿರ್ದಿಷ್ಟಪಡಿಸಿದ ಸಂಕೀರ್ಣ ಪ್ರಕ್ರಿಯೆಗಳು ಮತ್ತು ಸಂಕೀರ್ಣವಾದ ದಾಖಲಾತಿಗಳು ವಿಷಯಗಳನ್ನು ಇನ್ನಷ್ಟು ಜಟಿಲಗೊಳಿಸುತ್ತವೆ.

ಈ ಹಿನ್ನೆಲೆಯಲ್ಲಿ ಇನ್‌ಹೆರಿಟೆನ್ಸ್ ನೀಡ್ಸ್ ಸರ್ವೀಸಸ್ ಪ್ರೈ. ಲಿ. (ಐಎನ್‌ಎಸ್‌ಪಿಎಲ್) ಆಸ್ತಿ ಮಾಲೀಕರ ಮರಣದ ನಂತರ ಮುಂದಿನ ಗೊತ್ತುಪಡಿಸಿದ ಫಲಾನುಭವಿಗೆ ತಡೆರಹಿತ ವರ್ಗಾವಣೆ ಮತ್ತು ಸ್ವತ್ತುಗಳ ವರ್ಗಾಯಿಸುವಿಕೆಯನ್ನು ಸಕ್ರಿಯಗೊಳಿಸಲು ತನ್ನ ಸೇವೆಗಳನ್ನು ರೂಪಿಸಿದೆ. ಒಬ್ಬ ವ್ಯಕ್ತಿಯ ಪೂರ್ವಾರ್ಜಿತ ಆಸ್ತಿಯ ಅನುಷ್ಠಾನಕ್ಕೆ ಸಂಬಂಧಿಸಿದ ನೋವಿನ ಅಂಶಗಳನ್ನು ಪರಿಹರಿಸಲು ಐಎನ್‌ಎಸ್‌ಪಿಎಲ್ ಸೂಕ್ತವಾದ ಪರಿಹಾರಗಳನ್ನು ವಿನ್ಯಾಸಗೊಳಿಸಿದೆ. ಐಎನ್‌ಎಸ್‌ಪಿಎಲ್‌ನಲ್ಲಿ ನಾವು, ಮೃತ ಆಸ್ತಿ ಮಾಲೀಕರ ಮರಣದ ನಂತರ, ಅವರ ಉಯಿಲಿನ ಪ್ರಕಾರ ಅಥವಾ ಒಂದುವೇಳೆ ಮೃತ ವ್ಯಕ್ತಿಯು ಉಯಿಲನ್ನು ಮಾಡದೇ ಮೃತಪಟ್ಟಿರುವ ಸಂದರ್ಭದಲ್ಲಿ ಅನ್ವಯವಾಗುವ ಉತ್ತರಾಧಿಕಾರ ಕಾನೂನುಗಳ ಪ್ರಕಾರ, ಗೊತ್ತುಪಡಿಸಿದ ಫಲಾನುಭವಿಗೆ ಸ್ವತ್ತುಗಳ ತಡೆರಹಿತ ವರ್ಗಾವಣೆ/ ವರ್ಗಾಯಿಸುವಿಕೆಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದ್ದೇವೆ.

wpChatIcon