ನಮ್ಮ ಮಾರ್ಗದರ್ಶಕರು

ತಮಾಲ್ ಬಂಡೊಪಾಧ್ಯಾಯ

ತಮಾಲ್ ಅವರು ಪ್ರಮುಖ ಬಿಸಿನೆಸ್ ಕ್ಷೇತ್ರದ ಪತ್ರಕರ್ತರಾಗಿದ್ದು, ಮಿಂಟ್ ದಿನಪತ್ರಿಕೆಯಲ್ಲಿ ಪ್ರಕಟವಾದ ಸಾಪ್ತಾಹಿಕ ಅಂಕಣಕ್ಕೆ ಹೆಸರುವಾಸಿಯಾಗಿದ್ದಾರೆ – ‘ಬ್ಯಾಂಕಿಂಗ್ ಅಂಡ್ ಫೈನಾನ್ಸ್ ಬ್ಯಾಂಕರ್ಸ್ ಟ್ರಸ್ಟ್’. ಹೆಚ್‌ಟಿ ಮೀಡಿಯಾ ಒಂದು ದಶಕದ ಹಿಂದೆ ಮಿಂಟ್ ಅನ್ನು ಪ್ರಾರಂಭಿಸಿದಾಗಿನಿಂದ ಇವರು ಕೋರ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ ಮತ್ತು ಪ್ರಸ್ತುತ ಬ್ಯುಸಿನೆಸ್ ಸ್ಟ್ಯಾಂಡರ್ಡ್‌ನಲ್ಲಿ ಪರಿಣಿತ ಅಂಕಣಕಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗೆ ಸಲಹೆಗಾರರೂ ಆಗಿದ್ದಾರೆ. ಇವರು ‘ಎ ಬ್ಯಾಂಕ್ ಫಾರ್ ದಿ ಬಕ್’, ‘ಸಹಾರಾ: ದಿ ಅನ್‌ಟೋಲ್ಡ್ ಸ್ಟೋರಿ’, ‘ಬಂಧನ್: ದಿ ಮೇಕಿಂಗ್ ಆಫ್ ಎ ಬ್ಯಾಂಕ್’, ‘ಎಚ್‌ಡಿಎಫ್‌ಸಿ ಬ್ಯಾಂಕ್ 2.0 ಫ್ರಮ್ ಡಾನ್ ಟು ಡಿಜಿಟಲ್’, ‘ಪ್ಯಾಂಡೆಮೊನಿಯಮ್: ದಿ ಗ್ರೇಟ್ ಇಂಡಿಯನ್ ಬ್ಯಾಂಕಿಂಗ್ ಟ್ರ್ಯಾಜಿಡಿ’ ಮತ್ತು ತೀರಾ ಇತ್ತೀಚಿನ “ರೋಲರ್ ಕೋಸ್ಟರ್ : ಎನ್ ಅಫೇರ್ ವಿದ್ ಬ್ಯಾಂಕಿಂಗ್” ಸೇರಿದಂತೆ ಹಣಕಾಸಿನ ಕುರಿತಾದ ಕೆಲವು ಬೆಸ್ಟ್ ಸೆಲ್ಲಿಂಗ್ ಪುಸ್ತಕಗಳ ಲೇಖಕರೂ ಆಗಿದ್ದಾರೆ.

ರಾಧಾಕೃಷ್ಣನ್ ನಾಯರ್

ಬ್ಯಾಂಕಿಂಗ್, ಸೆಕ್ಯುರಿಟೀಸ್ ಮತ್ತು ವಿಮಾ ವಲಯದಲ್ಲಿ ನಾಲ್ಕು ದಶಕಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ ರಾಧಾಕೃಷ್ಣನ್ ನಾಯರ್ ಅವರು ಐಆರ್‌ಡಿಎ, ಸೆಬಿ ಮತ್ತು ಐಸಿಐಸಿಐ ಸಮೂಹದ ವಿವಿಧ ಕಂಪನಿಗಳಲ್ಲಿ ಬೋರ್ಡ್-ಮಟ್ಟದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ವಿಮೆ ಮತ್ತು ಸೆಕ್ಯುರಿಟೀಸ್ ವಲಯದಲ್ಲಿ ನಾವೀನ್ಯತೆಗಳ ಪ್ರಮುಖ ಉಪಕ್ರಮಗಳಿಗೆ ಹೆಸರುವಾಸಿಯಾಗಿದ್ದಾರೆ.

Ashok Barat

ಅಶೋಕ್ ಬಾರಾತ್

ಚಾರ್ಟರ್ಡ್ ಅಕೌಂಟೆಂಟ್ಸ್ ಅಂಡ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾದ ಸಹ ಸದಸ್ಯರಾಗಿರುವ ಇವರು ಯುನಿಲಿವರ್, ಎಲೆಕ್ಟ್ರೋಲಕ್ಸ್, ಪೆಪ್ಸಿ, ಟೆಲ್‌ಸ್ಟ್ರಾ ಮತ್ತು ಹೈಂಜ್‌ನಂತಹ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಕೆಲಸ ಮಾಡಿದ್ದಾರೆ. ಇವರು ಫೋರ್ಬ್ಸ್ & ಕಂಪನಿ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಆಗಿಯೂ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ ಮತ್ತು ಬಾಂಬೆ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಮಾಜಿ ಅಧ್ಯಕ್ಷರಾಗಿದ್ದಾರೆ, ASSOCHAM ನ ಎಂಸಿ ಸದಸ್ಯರು ಮತ್ತು ಐಐಎಂ (ಎಲ್) ನ ಮಾಜಿ ಸಂದರ್ಶಕ ಅಧ್ಯಾಪಕರಾಗಿದ್ದಾರೆ.

Ev depolama Ucuz nakliyat teensexonline.com
wpChatIcon